Tuesday, December 29, 2009

ಸುಗಮ ಸಂಗೀತ ಗಾರುಡಿಗ ಅಶ್ವಥ್ ಇನ್ನಿಲ್ಲ


ಇಂದು ಡಿಸೆಂಬರ್. ೨೯ ಅವರ ೭೧ನೇ ಜನ್ಮದಿನದಂದೇ ಅವರು ವಿಧಿವಶರಾಗಿರುವು ದು ಕಾಕತಾಳೀಯ ಹಾಗೂ ವಿಪರ್ಯಾಸ.


ಸುಗಮ ಸಂಗೀತ ಲೋಕದ ಕಂಚಿನ ಕಂಠದ ಗಾಯಕ ಸಿ.ಅಶ್ವಥ್(70ವ) ಮಂಗಳವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಶ್ವಥ್ ಅವರು ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದ ಪರಿಣಾ ಮ ಇಂದು ತಮ್ಮ ಗಾನ ನಿಲ್ಲಿಸಿದ್ದಾರೆ. ತಮ್ಮ 71ನೇ ಹುಟ್ಟು ಹಬ್ಬದ ದಿನ(ಡಿ.29)ದಂದೇ ಅಶ್ವ ಥ್ ಇಹಲೋಕ ತ್ಯಜಿಸಿರುವುದು ಅಶ್ವಥ್ ಅಭಿಮಾನಿಗಳಲ್ಲಿ ದಿಗ್ಭ್ರಾಂತಿ ಮೂಡಿಸಿದೆ.

ಭಾವಗೀತೆ ಮತ್ತು ಜಾನಪದ ಗೀತೆಗಳ ಹಾಡಿಗೆ ಜೀವ ತುಂಬುವ ಮೂಲಕ ಲಕ್ಷಾಂತರ ಸಂಗೀ ತಾಭಿಮಾನಿಗಳಲ್ಲಿ ರೋಮಾಂಚನ ಮೂಡಿಸುತ್ತಿದ್ದ ಅಶ್ವಥ್ ನಿಧನ ಸಂಗೀತ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸಂಗೀತ ಕಾರ್ಯಕ್ರಮಗಳಿಂದ ಮನೆ ಮಾತಾದ ಅಶ್ವಥ್ ಸಾವಿರಾ ರು ಯವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದರು.

1939 ಡಿಸೆಂಬರ್ 29ರಂದು ಹಾಸನದ ಚನ್ನರಾಯಪಟ್ಟಣದಲ್ಲಿ ಜನಿಸಿದ್ದ ಸಿ.ಅಶ್ವಥ್ ಸುಮಾರು 27ವರ್ಷಗಳ ಕಾಲ ಐಐಟಿಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ ರಂಗಭೂಮಿ, ಕಾಕನಕೋಟೆ ಮೂ ಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಜನಮೆಚ್ಚುಗೆ ಪಡೆದ ಹೆಮ್ಮೆ ಅಶ್ವಥ್ ಅವರದ್ದು. ಮೈಸೂರು ಮಲ್ಲಿಗೆ, ಶ್ರಾವಣ ಬಂತು ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಆಲ್ಬಮ್ ಹೊರಬಂದಿತ್ತು.

೧೯೩೯ ಡಿಸೆಂಬರ್ ೨೯ರಂದು ಜನಿಸಿದ್ದ ಅವರು, ಸಂಗೀತದಲ್ಲೇ ಸಾಧನೆ ಮಾಡಿದವರು. ಬಾಲ್ಯ ದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು, ಗುರುಗಳಾದ ದೇವಗಿರಿ ಶಂಕರ್ ರಾವ್ ರವರಲ್ಲಿ ಸಂಗೀತಾಭ್ಯಾಸ ಮಾಡಿದರು. ಕಾಕನಕೋಟೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡು ವ ಮೂಲಕ ಅವರು ಚಿತ್ರೋದ್ಯಮಕ್ಕೆ ಕಾಲಿಟ್ಟರು.

ಅಲ್ಲಿಂದ ಪ್ರಾರಂಭವಾದ ಅವರ ವಿಶಿಷ್ಟ ಛಾಪು, ನಂತರ ಸುಗಮ ಸಂಗೀತದೆಡೆಗೂ ಹೊರಳಿತು. ಮೈಸೂರು ಮಲ್ಲಿಗೆ, ಶಿಶುನಾಳ ಶರೀಫರ ಹಾಡುಗಳು, ಸುಬ್ಬಾಭಟ್ಟರ ಮಗಳೇ ಮುಂತಾದ ಧ್ವನಿಸುರುಳಿ ಅವರನ್ನು ಯಶಸ್ಸಿನ ಹಾಗೂ ಜನಪ್ರಿಯತೆಯ ಉತ್ತುಂಗಕ್ಕೇರಿಸಿದವು. ಸುಗಮ ಸಂಗೀತದಲ್ಲೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಸಿ. ಅಶ್ವಥ್, ಭಾವಗೀತೆಗಳ ಲೋಕಕ್ಕೇ ಹೊಸ ಮೆರುಗನ್ನು ತಂದಿತ್ತವರು.

ತಮ್ಮ ವಿಭಿನ್ನ ಪ್ರಯೋಗವಾದ `ಕನ್ನಡವೇ ಸತ್ಯ' ಕಾರ್ಯಕ್ರಮದ ಮೂಲಕ ಅಶ್ವಥ್, ಕನ್ನಡದ ಮನೆ ಮಾತಾದಾರು. ಕನ್ನಡದ ಇತಿಹಾಸದಲ್ಲೇ `ಕನ್ನಡವೇ ಸತ್ಯ' ಒಂದು ಮೈಲಿಗಲ್ಲಾಗಿದೆ. ಸಂಗೀತವನ್ನು ತಮ್ಮದೇ ಆದ ಸೂಕ್ಷ ಒಳನೋಟದಿಂದ ನೋಡುತ್ತಿದ್ದ ಅಶ್ವಥ್, ತಮ್ಮನ್ನು ತಾವು ಸಂಗೀತ ಸಂಯೋಜರೆಂದು ಹೇಳಿಕೊಳ್ಳದೇ, `ಸ್ವರ ಸಂಯೋಜಕರೆಂದೇ ಕರೆದುಕೊಳ್ಳುತ್ತಿದ್ದರು.


No comments:

Post a Comment