Thursday, December 31, 2009

Happy New Year 2010


My wishes for you in year 2010, Great start for Jan, Love for Feb, Peace for march,
No worries for April, Fun for May, Joy for June to Nov, Happiness for Dec.
Have a lucky Happy & wonderful New Year 2010...

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣ ಮುದಚ್ಯತೇ| ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವ ಶಿಷ್ಯತೇ ||

ಅದೂ ಪೂರ್ಣ, ಇದೂ ಪೂರ್ಣ, ಪೂರ್ಣಕ್ಕೆ ಪೂರ್ಣ ಕೂಡಿಸಿದರೂ ಪೂರ್ಣ, ಪೂರ್ಣದಿಂದ ಪೂರ್ಣ ಕಳೆದರೂ ಪೂರ್ಣ-ಈ ಉಪನಿಷತ್ ವಾಕ್ಯವನ್ನು 2010 ಒಂದರ್ಥದಲ್ಲಿ ಸಂಕೇತಿಸುತ್ತದೆ. ಪೂರ್ಣ (ಶೂನ್ಯ-ಸೊನ್ನೆ) ಈ ವರ್ಷದಲ್ಲಿ ಎರಡು ಬಂದಿದೆ. ಮೊದಲ ಸಂಖ್ಯೆ ಎರಡು. ಅದು ಶೂನ್ಯವಾಗಿ ಒಂದಾಗಬೇಕೆನ್ನುವುದು ಮುಂದಿನೆರಡು ಸಂಖ್ಯೆಗಳ ಅರ್ಥ. ಎರಡು ಎಂಬ ಪ್ರತ್ಯೇಕತೆ ಹೋಗಿ, ನಾವೆಲ್ಲ ಒಂದೇ ಎಂಬ ಏಕತೆ ಮೂಡಿದರೆ ಲಭ್ಯ ಪೂರ್ಣತೆ (ಶೂನ್ಯ-ಸೊನ್ನೆ). ನವ ವರ್ಷ ಸಂಕೇತಿಸುವ ಪೂರ್ಣತೆ ನಮ್ಮೆಲ್ಲ ಮನಸ್ಸುಗಳನ್ನು ಒಂದುಗೂಡಿಸಿ ಭಾವೈಕ್ಯದತ್ತ ಮುನ್ನಡೆಸಲಿ ಎಂದು ಹೊಸ ವರ್ಷದ ಶುಭ ಹಾರೈಕೆಗಳನ್ನು ಬಯಸುವ

Wednesday, December 30, 2009

ನೂರೊಂದು ನೆನಪು ಎದೆಯಾಳದಿಂದ..

ವಿಷ್ಣು ವರ್ಧನ್ ಅವರ ಅಭಿನಯ ಸಾಮರ್ಥ್ಯವನ್ನು ಪ್ರಚುರಪಡಿಸಿದ 'ಬಂಧನ' ಚಿತ್ರದ ಈ ಹಾಡು ಎಂದೆಂದಿಗೂ ಮರೆಯಲಾಗದು.

ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು ನಗಲಮ್ಮ ಎಂದು
ಎಂದೆಂದು ಇರಲಮ್ಮ ಈ ದಿವ್ಯ ಬಂಧ
ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ಒಲವೆಂಬ ಲತೆಯು ತಂದಂತ ಹೂವು
ಮುಡಿಯೇರೆ ನಲಿವು ಮುಡಿಜಾರೆ ನೋವು
ಕೈಗೂಡಿದಾಗ ಕಂಡಂತ ಕನಸು
ಅದೃಷ್ಟದಾಟ ತಂದಂತ ಸೊಗಸು
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ
ನೀವೆಂದು ಇರಬೇಕು ಸಂತೋಷದಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ

ತುಟಿಮೇಲೆ ಬಂದಂತ ಮಾತೊಂದೆ ಒಂದು
ಎದೆಯಲ್ಲಿ ಉಳಿದಿದ್ದು ಮುನ್ನೂರ ಒಂದು
ಮೂರು ಗಂಟಲ್ಲಿ ಈ ಬಾಳ ನಂಟು
ಕೇಳಿ ಪಡೆದಾಗ ಸಂತೋಷ ಉಂಟು
ನಿಮ್ಮ ಹರುಷದಲಿ ನನ್ನ ಉಸಿರಿರಲಿ
ನಿಮ್ಮ ಹರುಷದಲಿ ನನ್ನ ಉಸಿರಿರಲಿ
ನನ್ನೆಲ್ಲ ಹಾರೈಕೆ ಈ ಹಾಡಿನಿಂದ

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ||

Tuesday, December 29, 2009

ಹೃದಯಾಘಾತ: ಸಾಹಸ ಸಿಂಹ ವಿಷ್ಣುವರ್ಧನ್ ಇನ್ನಿಲ್ಲ



ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರು ಮಂಗಳವಾರ ಮಧ್ಯರಾತ್ರಿ ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದು, ಕನ್ನಡ ಚಿತ್ರರಂಗದ ದಿಗ್ಗಜರು ಮತ್ತು ಚಿತ್ರಪ್ರೇಮಿಗಳು ತೀವ್ರ ಆಘಾತಕ್ಕೀಡಾಗಿದ್ದಾರೆ.

ಮೈಸೂರಿನಲ್ಲಿದ್ದ ವಿಷ್ಣುವರ್ಧನ್‌ರಿಗೆ ಬುಧವಾರ ಮುಂಜಾನೆ 2.30ರ ಹೊತ್ತಿಗೆ ಎದೆನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ಮುಟ್ಟುವ ಮೊದಲೇ ಅವರು ಸುಮಾರು 3.00 ಗಂಟೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ. 59 ವರ್ಷ ವಯಸ್ಸಾಗಿದ್ದ ಅವರು ಪತ್ನಿ ಹಾಗೂ ನಟಿ ಭಾರತಿ ಹಾಗೂ ಇಬ್ಬರು ದತ್ತು ಪುತ್ರಿಯರಾದ ಕೀರ್ತಿ ಮತ್ತು ಚಂದನರನ್ನು ಅಗಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ಡಾ.ವಿಷ್ಣುವರ್ಧನ್ 197 ಚಿತ್ರಗಳಲ್ಲಿ ನಟಿಸಿದ್ದು, 7 ರಾಜ್ಯಪ್ರಶಸ್ತಿಗಳು, 5 ಫಿಲ್ಮ್ ಫೇರ್ ಪ್ರಶಸ್ತಿಗಳು ಅವರ ಕೀರ್ತಿ ಮುಕುಟವನ್ನು ಅಲಂಕರಿಸಿದ್ದವು.

ಅವರು ಕಣಗಾಲ್ ಶಿಷ್ಯ...
ಡಾ. ವಿಷ್ಣುವರ್ಧನ್ 1952ರ ಸೆಪ್ಟೆಂಬರ್ 18ರಂದು ಜನಿಸಿದ ವಿಷ್ಣು, ಅವರ ಮೂಲ ಹೆಸರು ಸಂಪತ್ ಕುಮಾರ್. ಪುಟ್ಟಣ್ಣ ಕಣಗಾಲ್ ಅವರು 'ನಾಗರಹಾವು' ಚಿತ್ರದ ಚಿತ್ರೀಕರಣದ ಸಂದರ್ಭ ಅವರಿಗೆ ವಿಷ್ಣುವರ್ಧನ್ ಎಂದು ಮರುನಾಮಕರಣ ಮಾಡಿದ್ದರು.

ತಮ್ಮ ಅಭಿನಯದಿಂದಾಗಿಯೇ ಸಾಹಸ ಸಿಂಹ ಎಂಬ ಬಿರುದು ಪಡೆದಿರುವ ಡಾ. ವಿಷ್ಣುವರ್ಧನ್ ಅವರ ಮೊದಲ ಚಿತ್ರ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರದ ಮೂಲಕ ತೆರೆಗೆ ಬಂದ ಅವರು, 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು.

ನಾಗರಹಾವು ಚಿತ್ರದಲ್ಲಿ ಸಿಡುಕಿನ ಪುಂಡ ರಾಮಚಾರಿ ಮತ್ತು ಸುಗಮ ಸಂಗೀತ ಲೋಕದ ಸಾಮ್ರಾಟ್ ಸಿ.ಅಶ್ವತ್ಥ್ ಬೆನ್ನು ಬೆನ್ನಿಗೆ ಅಗಲಿರುವುದು ಸಿನಿಮಾ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿತ್ತು. ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿ೦ಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ನಟನೆ ಮಾತ್ರವೇ ಅಲ್ಲದೆ, ಹಿನ್ನೆಲೆ ಗಾಯನವನ್ನೂ ಕೂಡ ಮಾಡಿರುವ ವಿಷ್ಣು ವರ್ಧನ್ ಅವರು 'ಬಂಧನ' ಚಿತ್ರದಲ್ಲಿ ನೀಡಿದ ಅಭಿನಯವು ಎಲ್ಲರ ಮನ ಗೆದ್ದಿತ್ತು.

ಸಾರ್ವಜನಿಕ ದರ್ಶನ-ಅಂತ್ಯಸಂಸ್ಕಾರ..
ಪಾರ್ಥಿವ ಶರೀರವನ್ನು ಬೆಂಗಳೂರಿನ ಅವರ ಜಯನಗರ ನಿವಾಸಕ್ಕೆ ತರಲಾಗಿದ್ದು, ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ ಬನಶಂಕರಿ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಭಾರತಿ ಮನವಿ....
ಯಜಮಾನ ನಿಮ್ಮನ್ನು ಬಿಟ್ಟು ಯಾರನ್ನೂ ಇಷ್ಟಪಟ್ಟವರಲ್ಲ. ಅವರಿಗೆ ಗಲಾಟೆ, ದೊಂಬಿಗಳು ಇಷ್ಟವಾಗಲ್ಲ. ಅದೂ ನಿಮಗೆ ಗೊತ್ತು. ಎಲ್ಲರೂ ಶಾಂತ ರೀತಿಯಿಂದಿದ್ದು ಅವರನ್ನ ಕಳಿಸಿಕೊಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ನಡೆಸಿಕೊಡಿ ಎಂದು ಭಾರತಿ ವಿಷ್ಣುವರ್ಧನ್ ಕರ್ನಾಟಕ ಜನತೆ ಹಾಗೂ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳಿಂದ ವಿಷಸೇವನೆ, ಲಾಠಿಚಾರ್ಜ್...
ವಿಷ್ಣು ನಿಧನರಾದ ಹಿನ್ನೆಲೆಯಲ್ಲಿ, ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಈ ಮಧ್ಯೆ, ಯಾವುದೇ ಅಹಿತಕರ ಘಟನೆ ಸಂಭವಿಸದಂತಿರಲು ಬೆಂಗಳೂರು ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಈ ನಡುವೆ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

ವಿಷ್ಣು ಸಾವಿನ ದುಃಖವನ್ನು ತಡೆಯಲಾಗದೆ ಅತಿರೇಕಗಳಿಗೆ ಮುಂದಾಗುತ್ತಿರುವ ಅಭಿಮಾನಿ ವೃಂದ ಹಲವು ಕಡೆ ವಿಷ ಸೇವಿಸಿರುವುದು ವರದಿಯಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಲಾಠಿಚಾರ್ಜ್‌ಗಳು ಕೂಡ ನಡೆದಿವೆ.

ಬೆಂಗಳೂರಿನ ಮಾಗಡಿ ರಸ್ತೆ ಸುಂಕದಕಟ್ಟೆಯಲ್ಲಿ ಅಭಿಮಾನಿಗಳು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ಮೈಸೂರು, ದೇವನಹಳ್ಳಿ ಸೇರಿದಂತೆ ಹಲವೆಡೆ ಸಾರ್ವಜನಿಕ ಬಂದ್‌ ಆಚರಿಸಲಾಗುತ್ತಿದೆ.

ಶಾಲಾ-ಕಾಲೇಜುಗಳಿಗೆ ರಜೆ...
ಮೇರು ನಟ ಅಸ್ತಂಗತರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ರದ್ದುಗೊಳಿಸಲಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಕನ್ನಡ ಸಿನಿಮಾಕ್ಕೂ ಇಂದು ರಜೆ...
ಇಂದು ರಾಜ್ಯದಾದ್ಯಂತ ಎಲ್ಲಾ ಸಿನಿಮಾ ಮಂದಿರಗಳನ್ನು ಮುಚ್ಚುವ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬಂದಿದೆ. ಅಲ್ಲದೆ ಇಂದು ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ.

ಭಾರೀ ಶೋಕ...
ತೀವ್ರ ಆಘಾತ ಅನುಭವಿಸಿರುವುದು ವಿಷ್ಣು ಆಪ್ತಸ್ನೇಹಿತ ಅಂಬರೀಷ್. ಅವರು ಗಳಗಳನೆ ಅಳುತ್ತಾ ಭಾವೋದ್ರೇಕಗೊಳಗಾಗಿದ್ದು, ಪತ್ನಿ-ನಟಿ ಸುಮಲತಾ ಸಮಾಧಾನಗೊಳಿಸಲು ಯತ್ನಿಸುತ್ತಿದ್ದಾರೆ.

ಉಳಿದಂತೆ ಉಪೇಂದ್ರ, ಸುದೀಪ್, ವಿ. ಮನೋಹರ್, ಜಯಂತಿ, ಪ್ರೇಮಾ, ಪ್ರಕಾಶ್ ರೈ, ಶ್ರೀನಾಥ್, ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸ ಮೂರ್ತಿ ಸೇರಿದಂತೆ ನೂರಾರು ಕಲಾವಿದರು ಮೇರುನಟನ ಅಂತಿಮ ದರ್ಶನ ಮಾಡುತ್ತಿದ್ದಾರೆ. ಮನೋಹರ್ ಒಂದು ಹಂತದಲ್ಲಿ ದುಃಖ ತಡೆಯಲಾಗದೆ ಕುಸಿದು ಬಿದ್ದರೂ, ನಂತರ ಚೇತರಿಸಿಕೊಂಡಿದ್ದಾರೆ.

ಉಡುಪಿ ಪೇಜಾವರ ಶ್ರೀಗಳು, ಬನ್ನಂಜೆ ಗೋವಿಂದಾಚಾರ್ಯ ಮುಂತಾದ ಗಣ್ಯರು ಕೂಡ ಸಾಹಸಸಿಂಹನ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದು, ಕುಟುಂಬಕ್ಕೆ ನೋವನ್ನು ತಾಳಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಸರಕಾರಗಳಿಂದ ಸಂತಾಪ...
ವಿಷ್ಣುವರ್ಧನ್ ಹಠಾತ್ ನಿಧನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಮೇರು ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ. ಅವರ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ನೋವನ್ನು ತುಂಬಿಕೊಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಅಂತಿಮ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತನ್ನ ಹೇಳಿಕೆಯಲ್ಲಿ ಕೇಂದ್ರ ಸರಕಾರದ ಪರವಾಗಿ ನಾನು ತೀವ್ರ ಸಂತಾಪ ಸೂಚಿಸುತ್ತಿರುವುದಾಗಿ ಹೇಳಿದ್ದಾರೆ. ಖರ್ಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಂತಿಮ ದರ್ಶನ ಪಡೆಯಲು ಹೊರಟಿರುವುದಾಗಿ ಮೂಲಗಳು ಹೇಳಿವೆ.

ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರು ಮಂಗಳವಾರ ಮಧ್ಯರಾತ್ರಿ ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದು, ಕನ್ನಡ ಚಿತ್ರರಂಗದ ದಿಗ್ಗಜರು ಮತ್ತು ಚಿತ್ರಪ್ರೇಮಿಗಳು ತೀವ್ರ ಆಘಾತಕ್ಕೀಡಾಗಿದ್ದಾರೆ.

ಮೈಸೂರಿನಲ್ಲಿದ್ದ ವಿಷ್ಣುವರ್ಧನ್‌ರಿಗೆ ಬುಧವಾರ ಮುಂಜಾನೆ 2.30ರ ಹೊತ್ತಿಗೆ ಎದೆನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ವಿಕ್ರಮ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆ ಮುಟ್ಟುವ ಮೊದಲೇ ಅವರು ಸುಮಾರು 3.00 ಗಂಟೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ. 59 ವರ್ಷ ವಯಸ್ಸಾಗಿದ್ದ ಅವರು ಪತ್ನಿ ಹಾಗೂ ನಟಿ ಭಾರತಿ ಹಾಗೂ ಇಬ್ಬರು ದತ್ತು ಪುತ್ರಿಯರಾದ ಕೀರ್ತಿ ಮತ್ತು ಚಂದನರನ್ನು ಅಗಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿದ್ದ ಡಾ.ವಿಷ್ಣುವರ್ಧನ್ 197 ಚಿತ್ರಗಳಲ್ಲಿ ನಟಿಸಿದ್ದು, 7 ರಾಜ್ಯಪ್ರಶಸ್ತಿಗಳು, 5 ಫಿಲ್ಮ್ ಫೇರ್ ಪ್ರಶಸ್ತಿಗಳು ಅವರ ಕೀರ್ತಿ ಮುಕುಟವನ್ನು ಅಲಂಕರಿಸಿದ್ದವು.

ಅವರು ಕಣಗಾಲ್ ಶಿಷ್ಯ...
ಡಾ. ವಿಷ್ಣುವರ್ಧನ್ 1952ರ ಸೆಪ್ಟೆಂಬರ್ 18ರಂದು ಜನಿಸಿದ ವಿಷ್ಣು, ಅವರ ಮೂಲ ಹೆಸರು ಸಂಪತ್ ಕುಮಾರ್. ಪುಟ್ಟಣ್ಣ ಕಣಗಾಲ್ ಅವರು 'ನಾಗರಹಾವು' ಚಿತ್ರದ ಚಿತ್ರೀಕರಣದ ಸಂದರ್ಭ ಅವರಿಗೆ ವಿಷ್ಣುವರ್ಧನ್ ಎಂದು ಮರುನಾಮಕರಣ ಮಾಡಿದ್ದರು.

ತಮ್ಮ ಅಭಿನಯದಿಂದಾಗಿಯೇ ಸಾಹಸ ಸಿಂಹ ಎಂಬ ಬಿರುದು ಪಡೆದಿರುವ ಡಾ. ವಿಷ್ಣುವರ್ಧನ್ ಅವರ ಮೊದಲ ಚಿತ್ರ ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರದ ಮೂಲಕ ತೆರೆಗೆ ಬಂದ ಅವರು, 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು.

ನಾಗರಹಾವು ಚಿತ್ರದಲ್ಲಿ ಸಿಡುಕಿನ ಪುಂಡ ರಾಮಚಾರಿ ಮತ್ತು ಸುಗಮ ಸಂಗೀತ ಲೋಕದ ಸಾಮ್ರಾಟ್ ಸಿ.ಅಶ್ವತ್ಥ್ ಬೆನ್ನು ಬೆನ್ನಿಗೆ ಅಗಲಿರುವುದು ಸಿನಿಮಾ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

2005ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿತ್ತು. ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿ೦ಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ನಟನೆ ಮಾತ್ರವೇ ಅಲ್ಲದೆ, ಹಿನ್ನೆಲೆ ಗಾಯನವನ್ನೂ ಕೂಡ ಮಾಡಿರುವ ವಿಷ್ಣು ವರ್ಧನ್ ಅವರು 'ಬಂಧನ' ಚಿತ್ರದಲ್ಲಿ ನೀಡಿದ ಅಭಿನಯವು ಎಲ್ಲರ ಮನ ಗೆದ್ದಿತ್ತು.

ಸಾರ್ವಜನಿಕ ದರ್ಶನ-ಅಂತ್ಯಸಂಸ್ಕಾರ..
ಪಾರ್ಥಿವ ಶರೀರವನ್ನು ಬೆಂಗಳೂರಿನ ಅವರ ಜಯನಗರ ನಿವಾಸಕ್ಕೆ ತರಲಾಗಿದ್ದು, ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ ಬನಶಂಕರಿ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಭಾರತಿ ಮನವಿ....
ಯಜಮಾನ ನಿಮ್ಮನ್ನು ಬಿಟ್ಟು ಯಾರನ್ನೂ ಇಷ್ಟಪಟ್ಟವರಲ್ಲ. ಅವರಿಗೆ ಗಲಾಟೆ, ದೊಂಬಿಗಳು ಇಷ್ಟವಾಗಲ್ಲ. ಅದೂ ನಿಮಗೆ ಗೊತ್ತು. ಎಲ್ಲರೂ ಶಾಂತ ರೀತಿಯಿಂದಿದ್ದು ಅವರನ್ನ ಕಳಿಸಿಕೊಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ನಡೆಸಿಕೊಡಿ ಎಂದು ಭಾರತಿ ವಿಷ್ಣುವರ್ಧನ್ ಕರ್ನಾಟಕ ಜನತೆ ಹಾಗೂ ಅವರ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳಿಂದ ವಿಷಸೇವನೆ, ಲಾಠಿಚಾರ್ಜ್...
ವಿಷ್ಣು ನಿಧನರಾದ ಹಿನ್ನೆಲೆಯಲ್ಲಿ, ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಈ ಮಧ್ಯೆ, ಯಾವುದೇ ಅಹಿತಕರ ಘಟನೆ ಸಂಭವಿಸದಂತಿರಲು ಬೆಂಗಳೂರು ನಗರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಈ ನಡುವೆ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಬಿಗಿ ಭದ್ರತೆ ಮಾಡಲಾಗಿದೆ.

ವಿಷ್ಣು ಸಾವಿನ ದುಃಖವನ್ನು ತಡೆಯಲಾಗದೆ ಅತಿರೇಕಗಳಿಗೆ ಮುಂದಾಗುತ್ತಿರುವ ಅಭಿಮಾನಿ ವೃಂದ ಹಲವು ಕಡೆ ವಿಷ ಸೇವಿಸಿರುವುದು ವರದಿಯಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಲಾಠಿಚಾರ್ಜ್‌ಗಳು ಕೂಡ ನಡೆದಿವೆ.

ಬೆಂಗಳೂರಿನ ಮಾಗಡಿ ರಸ್ತೆ ಸುಂಕದಕಟ್ಟೆಯಲ್ಲಿ ಅಭಿಮಾನಿಗಳು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ. ಮೈಸೂರು, ದೇವನಹಳ್ಳಿ ಸೇರಿದಂತೆ ಹಲವೆಡೆ ಸಾರ್ವಜನಿಕ ಬಂದ್‌ ಆಚರಿಸಲಾಗುತ್ತಿದೆ.

ಶಾಲಾ-ಕಾಲೇಜುಗಳಿಗೆ ರಜೆ...
ಮೇರು ನಟ ಅಸ್ತಂಗತರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಆದರೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಪರೀಕ್ಷೆಗಳನ್ನು ರದ್ದುಗೊಳಿಸಲಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.

ಕನ್ನಡ ಸಿನಿಮಾಕ್ಕೂ ಇಂದು ರಜೆ...
ಇಂದು ರಾಜ್ಯದಾದ್ಯಂತ ಎಲ್ಲಾ ಸಿನಿಮಾ ಮಂದಿರಗಳನ್ನು ಮುಚ್ಚುವ ನಿರ್ಧಾರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಬಂದಿದೆ. ಅಲ್ಲದೆ ಇಂದು ಕನ್ನಡ ಚಿತ್ರರಂಗದ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ.

ಭಾರೀ ಶೋಕ...
ತೀವ್ರ ಆಘಾತ ಅನುಭವಿಸಿರುವುದು ವಿಷ್ಣು ಆಪ್ತಸ್ನೇಹಿತ ಅಂಬರೀಷ್. ಅವರು ಗಳಗಳನೆ ಅಳುತ್ತಾ ಭಾವೋದ್ರೇಕಗೊಳಗಾಗಿದ್ದು, ಪತ್ನಿ-ನಟಿ ಸುಮಲತಾ ಸಮಾಧಾನಗೊಳಿಸಲು ಯತ್ನಿಸುತ್ತಿದ್ದಾರೆ.

ಉಳಿದಂತೆ ಉಪೇಂದ್ರ, ಸುದೀಪ್, ವಿ. ಮನೋಹರ್, ಜಯಂತಿ, ಪ್ರೇಮಾ, ಪ್ರಕಾಶ್ ರೈ, ಶ್ರೀನಾಥ್, ನಾಗತಿಹಳ್ಳಿ ಚಂದ್ರಶೇಖರ್, ಶ್ರೀನಿವಾಸ ಮೂರ್ತಿ ಸೇರಿದಂತೆ ನೂರಾರು ಕಲಾವಿದರು ಮೇರುನಟನ ಅಂತಿಮ ದರ್ಶನ ಮಾಡುತ್ತಿದ್ದಾರೆ. ಮನೋಹರ್ ಒಂದು ಹಂತದಲ್ಲಿ ದುಃಖ ತಡೆಯಲಾಗದೆ ಕುಸಿದು ಬಿದ್ದರೂ, ನಂತರ ಚೇತರಿಸಿಕೊಂಡಿದ್ದಾರೆ.

ಉಡುಪಿ ಪೇಜಾವರ ಶ್ರೀಗಳು, ಬನ್ನಂಜೆ ಗೋವಿಂದಾಚಾರ್ಯ ಮುಂತಾದ ಗಣ್ಯರು ಕೂಡ ಸಾಹಸಸಿಂಹನ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದು, ಕುಟುಂಬಕ್ಕೆ ನೋವನ್ನು ತಾಳಿಕೊಳ್ಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಸರಕಾರಗಳಿಂದ ಸಂತಾಪ...
ವಿಷ್ಣುವರ್ಧನ್ ಹಠಾತ್ ನಿಧನಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಮೇರು ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಅನಾಥವಾಗಿದೆ. ಅವರ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ನೋವನ್ನು ತುಂಬಿಕೊಡುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಅಂತಿಮ ದರ್ಶನ ಪಡೆದ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ತನ್ನ ಹೇಳಿಕೆಯಲ್ಲಿ ಕೇಂದ್ರ ಸರಕಾರದ ಪರವಾಗಿ ನಾನು ತೀವ್ರ ಸಂತಾಪ ಸೂಚಿಸುತ್ತಿರುವುದಾಗಿ ಹೇಳಿದ್ದಾರೆ. ಖರ್ಗೆ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಂತಿಮ ದರ್ಶನ ಪಡೆಯಲು ಹೊರಟಿರುವುದಾಗಿ ಮೂಲಗಳು ಹೇಳಿವೆ.

ಸುಗಮ ಸಂಗೀತ ಗಾರುಡಿಗ ಅಶ್ವಥ್ ಇನ್ನಿಲ್ಲ


ಇಂದು ಡಿಸೆಂಬರ್. ೨೯ ಅವರ ೭೧ನೇ ಜನ್ಮದಿನದಂದೇ ಅವರು ವಿಧಿವಶರಾಗಿರುವು ದು ಕಾಕತಾಳೀಯ ಹಾಗೂ ವಿಪರ್ಯಾಸ.


ಸುಗಮ ಸಂಗೀತ ಲೋಕದ ಕಂಚಿನ ಕಂಠದ ಗಾಯಕ ಸಿ.ಅಶ್ವಥ್(70ವ) ಮಂಗಳವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಶ್ವಥ್ ಅವರು ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದ ಪರಿಣಾ ಮ ಇಂದು ತಮ್ಮ ಗಾನ ನಿಲ್ಲಿಸಿದ್ದಾರೆ. ತಮ್ಮ 71ನೇ ಹುಟ್ಟು ಹಬ್ಬದ ದಿನ(ಡಿ.29)ದಂದೇ ಅಶ್ವ ಥ್ ಇಹಲೋಕ ತ್ಯಜಿಸಿರುವುದು ಅಶ್ವಥ್ ಅಭಿಮಾನಿಗಳಲ್ಲಿ ದಿಗ್ಭ್ರಾಂತಿ ಮೂಡಿಸಿದೆ.

ಭಾವಗೀತೆ ಮತ್ತು ಜಾನಪದ ಗೀತೆಗಳ ಹಾಡಿಗೆ ಜೀವ ತುಂಬುವ ಮೂಲಕ ಲಕ್ಷಾಂತರ ಸಂಗೀ ತಾಭಿಮಾನಿಗಳಲ್ಲಿ ರೋಮಾಂಚನ ಮೂಡಿಸುತ್ತಿದ್ದ ಅಶ್ವಥ್ ನಿಧನ ಸಂಗೀತ ಲೋಕಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸಂಗೀತ ಕಾರ್ಯಕ್ರಮಗಳಿಂದ ಮನೆ ಮಾತಾದ ಅಶ್ವಥ್ ಸಾವಿರಾ ರು ಯವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದರು.

1939 ಡಿಸೆಂಬರ್ 29ರಂದು ಹಾಸನದ ಚನ್ನರಾಯಪಟ್ಟಣದಲ್ಲಿ ಜನಿಸಿದ್ದ ಸಿ.ಅಶ್ವಥ್ ಸುಮಾರು 27ವರ್ಷಗಳ ಕಾಲ ಐಐಟಿಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೇ ರಂಗಭೂಮಿ, ಕಾಕನಕೋಟೆ ಮೂ ಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಜನಮೆಚ್ಚುಗೆ ಪಡೆದ ಹೆಮ್ಮೆ ಅಶ್ವಥ್ ಅವರದ್ದು. ಮೈಸೂರು ಮಲ್ಲಿಗೆ, ಶ್ರಾವಣ ಬಂತು ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಆಲ್ಬಮ್ ಹೊರಬಂದಿತ್ತು.

೧೯೩೯ ಡಿಸೆಂಬರ್ ೨೯ರಂದು ಜನಿಸಿದ್ದ ಅವರು, ಸಂಗೀತದಲ್ಲೇ ಸಾಧನೆ ಮಾಡಿದವರು. ಬಾಲ್ಯ ದಿಂದಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಇವರು, ಗುರುಗಳಾದ ದೇವಗಿರಿ ಶಂಕರ್ ರಾವ್ ರವರಲ್ಲಿ ಸಂಗೀತಾಭ್ಯಾಸ ಮಾಡಿದರು. ಕಾಕನಕೋಟೆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡು ವ ಮೂಲಕ ಅವರು ಚಿತ್ರೋದ್ಯಮಕ್ಕೆ ಕಾಲಿಟ್ಟರು.

ಅಲ್ಲಿಂದ ಪ್ರಾರಂಭವಾದ ಅವರ ವಿಶಿಷ್ಟ ಛಾಪು, ನಂತರ ಸುಗಮ ಸಂಗೀತದೆಡೆಗೂ ಹೊರಳಿತು. ಮೈಸೂರು ಮಲ್ಲಿಗೆ, ಶಿಶುನಾಳ ಶರೀಫರ ಹಾಡುಗಳು, ಸುಬ್ಬಾಭಟ್ಟರ ಮಗಳೇ ಮುಂತಾದ ಧ್ವನಿಸುರುಳಿ ಅವರನ್ನು ಯಶಸ್ಸಿನ ಹಾಗೂ ಜನಪ್ರಿಯತೆಯ ಉತ್ತುಂಗಕ್ಕೇರಿಸಿದವು. ಸುಗಮ ಸಂಗೀತದಲ್ಲೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಸಿ. ಅಶ್ವಥ್, ಭಾವಗೀತೆಗಳ ಲೋಕಕ್ಕೇ ಹೊಸ ಮೆರುಗನ್ನು ತಂದಿತ್ತವರು.

ತಮ್ಮ ವಿಭಿನ್ನ ಪ್ರಯೋಗವಾದ `ಕನ್ನಡವೇ ಸತ್ಯ' ಕಾರ್ಯಕ್ರಮದ ಮೂಲಕ ಅಶ್ವಥ್, ಕನ್ನಡದ ಮನೆ ಮಾತಾದಾರು. ಕನ್ನಡದ ಇತಿಹಾಸದಲ್ಲೇ `ಕನ್ನಡವೇ ಸತ್ಯ' ಒಂದು ಮೈಲಿಗಲ್ಲಾಗಿದೆ. ಸಂಗೀತವನ್ನು ತಮ್ಮದೇ ಆದ ಸೂಕ್ಷ ಒಳನೋಟದಿಂದ ನೋಡುತ್ತಿದ್ದ ಅಶ್ವಥ್, ತಮ್ಮನ್ನು ತಾವು ಸಂಗೀತ ಸಂಯೋಜರೆಂದು ಹೇಳಿಕೊಳ್ಳದೇ, `ಸ್ವರ ಸಂಯೋಜಕರೆಂದೇ ಕರೆದುಕೊಳ್ಳುತ್ತಿದ್ದರು.


Monday, December 28, 2009

Veteran Hotelier NAKRE Shyam N Shetty Elected Bombay Bunts Association Vice President


ನಕ್ರೆ ಶ್ಯಾಮ್ ಎನ್ ಶೆಟ್ಟಿ ಮುಂಬಯಿಯ ಪ್ರತಿಷ್ಠಿತ ಬೊಂಬೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ



Shyam N Shetty, veteran hotelier of Navi Mumbai was unanimously elected as vice-president of Bombay Bunts Association.

Association president Jayant K Shetty announced the selection during the extraordinary general body meeting held at their premises here on Saturday December 26.

Shyam N Shetty is a native of Nakre and belongs to the lineage family of Balipaguttu of Karkala taluk, Udupi district of Karnataka. He has over four decades of experience in hotel and hospitality industry and owns Shweta Palace Hotel in Navi Mumbai. He served as honorary chief secretary of Navi Mumbai Hotel Owners' Association for over a decade and also served as its president.

He has also served as joint treasurer of Federation of Hotel and Restaurant Association - Maharashtra. He had also produced Kannada movie 'Ivalantaha Hendti' (ಇವಳ್ಹಂತ ಹೆಂಡ್ತಿ) with sandalwood actors Anant Nag, Mahalaxmi, Tara, Sadashiv Salian and others in 1990s.

ಮುಂಬಯಿ ಮಹಾನಗರದಲ್ಲಿ ಸಮೂದಾಯಿಕ ಪ್ರತಿಷ್ಠಿತ ಸಂಸ್ಥೆಯಾಗಿ ಸುಮಾರು ಮೂರು ದಶಕದತ್ತ ದಾಲುಗಾಲಿರಿಸುತ್ತಿರುವ ಬೋಂಬೆ ಬಂಟ್ಸ್ ಎಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ನವಿ ಮುಂಬಯಿಯ ಖ್ಯಾತ ಹೊಟೇಲು ಉದ್ಯಮಿ ಶ್ಯಾಮ ಎನ್.ಶೆಟ್ಟಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಕಳೆದ ಶನಿವಾರ ಎಸೋಸಿಯೇಶನ್‌ನ ಸಭಾಗೃಹದಲ್ಲಿ ನಡೆಸಲಾಗಿದ್ದ ವಿ‌ಶೇಷ ಸಭೆಯಲ್ಲಿ ಶ್ಯಾಮ ಎನ್.ಶೆಟ್ಟಿ ಇವರನ್ನು ಆಯ್ಕೆಯನ್ನು ಅಧ್ಯಕ್ಷ ಜಯಂತ್ ಕೆ. ಶೆಟ್ಟಿ ಪ್ರಕಟಿಸಿದರು.

ಶ್ಯಾಮ ಎನ್.ಶೆಟ್ಟಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ರೆ ಬಲಿಪಗುತ್ತು ಮನೆತನದವರಾಗಿದ್ದಾರೆ. ಹೊಟೇಲು ಉದ್ಯಮದಲ್ಲಿ ಸುಮಾರು ನಾಲ್ಕು ದಶಕದ ಅನುಭವ ಇರುವ ಶ್ರೀಯುತರು ಕ್ಯಾಟರಿಂಗ್ ಉದ್ಯಮದಲ್ಲೂ ಪರಿಣತರು. ಬೃಹನ್ಮುಂಬಯಿ ಉಪನಗರದ ನವಿಮುಂಬಯಿಯಲ್ಲಿ ಶ್ವೇತಾ ಪ್ಯಾಲೇಸ್ ಹೊಟೇಲ್ ಹೊಂದಿರುವ ಇವರು ನವಿ ಮುಂಬಯಿ ಹೊಟೇಲ್ ಓನರ್‍ಸ್ ಎಸೋಸಿಯೇಶನ್‌ನಲ್ಲಿ ಸುಮಾರು ಒಂದು ದಶಕದ ಕಾಲಾವಧಿ ಗೌ| ಪ್ರಧಾನ ಕಾರ್ಯದರ್ಶಿ ಆಗಿ ಬಳಿಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಧೀಮಂತ ವ್ಯಕ್ತಿತ್ವದ ಮುಂದಾ ಳು ಆಗಿರುವರು.

ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಎಸೋಸಿಯೇಶನ್ ಮಹಾರಾಷ್ಟ್ರ ಇದರ ಜೊತೆ ಕೋಶಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಶ್ಯಾಮಣ್ಣ ಇವರು ಬೋಂಬೆ ಬಂಟ್ಸ್ ಎಸೋಸಿಯೇಶನ್‌ನ ವಿವಿಧ ಹುದ್ದೆಗಳನ್ನಲಂಕರಿಸಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಶ್ರಮಿಸಿರುವರು. ೧೯೮೭ರಲ್ಲಿ ಅನಂತ್‌ನಾಗ್, ಮಹಾಲಕ್ಷ್ಮಿ, ತಾರಾ, ಸದಾಶಿವ ಸಾಲ್ಯಾನ್ ಮತ್ತಿತರರು ನಟಿಸಿದ ಇವಳಂತಹ ಹೆಂಡ್ತಿ ಕನ್ನಡ ಚಲನಚಿತ್ರ ಇವರ ನಿರ್ಮಾಪಕತ್ವದಲ್ಲಿ ತೆರೆ ಕಂಡಿತ್ತು.



Sunday, December 27, 2009

Vikas, Supreetha , Anitha Crowned Mr, Ms and Mrs Bunt at Akanksha 2009


ಬಂಟರ ಸಂಘ ಮುಂಬಯಿ ಯುವ ವಿಭಾಗದ ಆಕಾಂಕ್ಷ-೨೦೦೯ : ವಿಕಾಸ್ ಮಿಸ್ಟರ್ ಬಂಟ್ ಮತ್ತು ಸುಪ್ರಿತಾ ಮಿಸ್ ಬಂಟ್ ಹಾಗೂ ಅನಿತಾ ಮಿಸೆಸ್ ಬಂಟ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗದ ಆಶ್ರಯದಲ್ಲಿ ಆಕಾಂಕ್ಷ-೨೦೦೯ ಕಾರ್ಯ ಕ್ರಮವನ್ನು ಇಂದಿಲ್ಲಿ (೨೬.೧೨.೦೯) ಭಾನುವಾರ ಸಂಜೆ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆಯೋಜಿಸಲಾಗಿತ್ತು. ಆಕಾಂಕ್ಷ-೨೦೦೯ ಕಾರ್ಯಕ್ರಮದಲ್ಲಿ ಮಿಸ್ಟರ್ ಬಂಟ್-೨೦೦೯ ಹಾಗೂ ಮಿಸ್ ಬಂಟ್-೨೦೦೯ ಮತ್ತು ವಿಶೇಷ ಕಾರ್ಯಕ್ರಮವಾಗಿ ಮಿಸೆಸ್ ಬಂಟ್-೨೦೦೯ ವೈಶಿಷ್ಟ್ಯಮ ಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಮಿಸ್ಟರ್ ಬಂಟ್-೨೦೦೯ ವಿಜೇತರಾಗಿ ವಿಕಾಸ್ ಶೆಟ್ಟಿ ಆಯ್ಕೆಯಾದರೆ, ಮಿಸ್ಟರ್ ಬಂಟ್ ಪ್ರಥಮ ರನ್ನರ್‍ಸ್ ಸ್ಥಾನದಿಂದ ನಿಖಿಲ್ ಶೆಟ್ಟಿ ವಿಜೇತರೆಣಿಸಿದರು. ರಾಕೇಶ್ ಶೆಟ್ಟಿ ಮಿಸ್ಟರ್ ಬಂಟ್ ದ್ವಿತೀ ಯ ರನ್ನರ್‍ಸ್ ಸ್ಥಾನ ಗಿಟ್ಟಿಸಿ ಕೊಂಡರು.

ಯುವತಿಯರ ವಿಭಾಗದಲ್ಲಿ ಮಿಸ್ ಬಂಟ್-೨೦೦೯ ಆಗಿ ಸುಪ್ರಿತಾ ಶೆಟ್ಟಿ ಜಯಶೀಲರಾದರೆ, ತೇಜೆಸ್ವೀ ಶೆಟ್ಟಿ ಇವರು ಮಿಸ್ ಬಂಟ್ ಪ್ರಥಮ ರನ್ನರ್‍ಸ್ ಸ್ಥಾನವನ್ನು ಪಡೆದರು. ಚೈತನ್ಯ ಶೆಟ್ಟಿ ಮಿಸ್ ಬಂಟ್ ದ್ವಿತೀಯ ಸ್ಥಾನ ವಿಜೇತರೆಣಿಸಿದರು.

ಶ್ರೀಮತಿ ಅನಿತಾ ಪ್ರಸಾದ್ ಶೆಟ್ಟಿ ಇವರು ಮಿಸೆಸ್ ಬಂಟ್-೨೦೦೯ ಎಂದೆಣಿಸಿ ಕೊಂಡರೆ, ಶ್ರೀ ಮತಿ ದಿವ್ಯ ಜಿ. ಶೆಟ್ಟಿ ಮಿಸೆಸ್ ಬಂಟ್ ಪ್ರಥಮ ರನ್ನರ್‍ಸ್ ಹಾಗೂ ಶ್ರೀಮತಿ ಶ್ರೇಯಾ ಶೆಟ್ಟಿ ಮಿಸೆಸ್ ಬಂಟ್ ದ್ವಿತೀಯ ಸ್ಥಾನದಿಂದ ಶೆಟ್ಟಿ ವಿಜೇತರಾದರು.

ಅಂತಿಮ ಸುತ್ತಿನಲ್ಲಿ ಇಂದು ಪ್ರತಿಯೊಂದು ವಿಭಾಗದಲ್ಲಿ ೯ ಸ್ಪರ್ಧಾಳುಗಳು ರ್‍ಯಾಂಪ್‌ನಲ್ಲಿ ನಡೆದು ತಮ್ಮ ಪ್ರತಿಭೆಕ್ರಿಯನ್ನು ತೋರ್ಪಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಲ್ ದ ಬೆಸ್ಟ್ ಗೋಲ್‌ಮಾಲ್-ಗೋಲ್‌ಮಾಲ್ ಖ್ಯಾತಿ ಯ ಬಾಲಿವುಡ್ ಚಿತ್ರದ ರೋಹಿತ್ ಶೆಟ್ಟಿ ಆಗಮಿಸಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಇವರು ವಹಿಸಿದ್ದರು. ಗೌರವ ಅತಿಥಿಯಾಗಿ ಯುವ ವಿಭಾ ಗದ ಕಾರ್ಯಾಧ್ಯಕ್ಷ ಗೌತಮ್ ಎಸ್.ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಆಶಾ ಎಂ.ಹೆಗ್ಡೆ ಹಾಗೂ ತೀರ್ಪುಗಾರರಾಗಿದ್ದ ಮಧುಶ್ರೀ ಶೆಟ್ಟಿ, ಡಾ| ನಿರ್ಮಲಾ ಶೆಟ್ಟಿ, ವಸಂತ್ ಟಿ.ಶೆಟ್ಟಿ ಮತ್ತು ಡಾ| ಪ್ರಮೀಳಾ ಶೆಟ್ಟಿಶಾಸಕ ಕೃಷ್ಣ ಹೆಗ್ಡೆ ವಿಶೇಷ ಆಮಂತ್ರಿತರಾಗಿ ಕಾರ್ಯ ಕ್ರಮಕ್ಕೆ ಮೆರುಗು ನೀಡಿ ವಿಜೇತ ಸ್ಪರ್ಧಾಳುಗಳಿಗೆ ಕಿರೀಟ ಧರಿಸಿ, ಗೌರವ ಶಾಲು ಧರಿಸಿ, ಪ್ರಶಸ್ತಿ-ಸ್ಮರಣಿ ಕೆಗಳನ್ನು ಪ್ರದಾನಿಸಿ ಸನ್ಮಾನಿಸುತ್ತಾ ವಿಜೇತರನ್ನಾಗಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಲ| ಮಾಲಾ ಶೆಟ್ಟಿ ಚೆಂಬೂರು, ಯುವ ವಿಭಾಗದ ಉಪಕಾರ್ಯಾಧ್ಯಕ್ಷ ಆರ್ವಿನ್ ಎಸ್.ಶೆಟ್ಟಿ, ಗೌ| ಕಾರ್ಯದರ್ಶಿ ರೇಶ್ಮಾ ಕಿರಣ್ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರಸನ್ನ ಜೆ.ಶೆಟ್ಟಿ, ಜತೆ ಕಾರ್ಯದರ್ಶಿ ವಿಜೇತಾ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ರಿತೇಶ್ ಆರ್.ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ಸಿ‌ಎ| ಶಂಕರ್ ಶೆಟ್ಟಿ, ಗೌ| ಕಾರ್ಯದರ್ಶಿ ವಿ.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರಭಾಕರ್ ಎಲ್.ಶೆಟ್ಟಿ, ಜತೆ ಕಾರ್ಯದರ್ಶಿ ಹರೀಶ್ ವಾಸು ಶೆಟ್ಟಿ, ಜತೆ ಕೋಶಾಧಿಕಾರಿ ಸಿ‌ಎ| ಸತೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಯುವ ವಿಭಾಗದ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿದರು. ಅನ್ವೀಶ್ ವಿ.ಶೆಟ್ಟಿ, ಪ್ರಶಾಂತ್ ಶೆಟ್ಟಿ, ಕು| ಸೋನಾಲಿ ಶೆಟ್ಟಿ ಮತ್ತು ಕು| ಸನ್ನಿಧಿ ಐಕಳ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಹರೀಶ್ ವಾಸು ಶೆಟ್ಟಿ ಹಾಗೂ ಪ್ರಭಾ ಕರ್ ಎಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.


Thursday, December 24, 2009

Ayyappa's Canine Devotee -Miracle or Coincidence?

Udupi: Ayyappa's Canine Devotee - Miracle or Coincidence?
Pics: Inchara Digitals
Daijiworld Media Network

Udupi, Dec 20: The innumerable devotees of Swami Ayappa from all over the country are flocking to his abode at Sabarimale in Kerala chanting, Swami Sharanam Ayyappa engaging buses, tempos and such private transport to travel to the destination. These apart, there are few other devotees who walk a long journey as an extreme penance to appease their revered Swami Ayyappa.

Chandrahas Shetty, a native of Innanje near Shankarapura here and residing in the western suburb of Mumbai began his holy pilgrimage to Sabarimale on November 23 traversing the distance walking along with other 23 devotees from Andheri, Mumbai, who were at Shankarapura here on Friday December 18. Uniqueness of his pilgrimage is that a black coloured dog has been accompanying the group on his journey. The dog joined the group at Khandala Ghat and since then has shunned non-vegetarian food as if following all the rituals of a true Ayyappa devotee. However, one needs to wait and watch as to dog will reach destination Sabarimale.

The dog following pilgrims to Swami Ayyappa on their pilgrimage to Sabarimale has created much interest among the people en-route their journey. The locals of Katpady offered the entourage a grand welcome when they arrived at their locality. The devotion of a dog to Swami Ayyappa seems to be a miracle in the modern era.
















Miracle or Coincidence?

Speaking to Daijiworld correspondent, Chandrahas said that it is nothing short of a miracle. Further it is a strange coincident that in a similar fashion another dog had followed Chandrahas in his earlier entourage to Sabarimale about seven years ago. The dog is now at his ancestral house in Innanje. This dog was allowed only till the precinct of hill shrine. The dog's devotion was also tested by keeping the meat in front of it, which it refused to eat," he recalls.

Chandrahas has been a staunch devotee of Swami Ayyappa and has undertaken Sabarimale pilgrimage thrice so far. This is the fourth pilgrimage that he has embarked on. Chandrahas and other devotees in his group walk daily about 35 to 40 kilometres in order to cover 1,700 kilometres to Sabarimale from Mumbai in about 40 days.

Rousing Welcome in Kerala

Chandrahas and his group are cared by the locals, once the group cross Karnataka boundary to Kerala. The fellow devotees wait for Chandrahas led group of pilgrims on either side of national highway and offer prayers and prostrate before them.



Friday, December 11, 2009

About World Tulu Convention - 2009

ಇಲ್ಲಿನ ರತ್ನವರ್ಮ ಕ್ರೀಡಾಂಗಣದ ತುಳುನಾಡ ಸಿರಿ ದೊಂಪದಲ್ಲಿ ರೂಪುಗೊಂಡಿರುವ ತುಳು ಗ್ರಾಮದಲ್ಲಿ ನಡೆಯುತ್ತಿರುವ ವಿಶ್ವ ತುಳು ಸಮ್ಮೇಳನ ತುಳುನಾಡಿನ ಸಾಂಪ್ರದಾಯಿಕತೆ, ತುಳುನಾಡಿನ ಖಾದ್ಯ, ಜೀವನ ಶೈಲಿಯ ಪೂರ್ಣ ಚಿತ್ರಣವನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ಮೂಲಕ ಇಲ್ಲಿಗೆ ಆಗಮಿಸಿದ ಸಾವಿರಾರು ಜನರಿಗೆ ಗತಕಾಲದ ನೆನಪನ್ನು ಕಟ್ಟಿಕೊಟ್ಟ ಸಂತಸ ಮೂಡಿಸಿದೆ.

ಇಲ್ಲಿನ ಅಟಿಲ್ದ ಅರಗಣೆ. ತುಳು ನಾಡಿನ ಅನಾದಿ ಕಾಲದ ಖಾದ್ಯಗಳನ್ನು ಇಂದಿನ ಜನತೆಗೆ ಪರಿಚಯಿಸುವ ಮಹತ್ತರವಾದ ಉದ್ದೇಶವನ್ನು ಇದು ಹೊಂದಿದೆ. ಅಟಿಲ್ದ ಅರಗಣೆಯ ಮುಂಭಾಗದಲ್ಲಿ ಹಿರಿಯ ಅಜ್ಜ-ಅಜ್ಜಿ ನಿಂತಿರುವ ಹಿರಿಯ ಪ್ರತಿಮೆ ಇದೆ. ಅದಕ್ಕೆ ತೊಡಿಸಲಾದ ಪಂಚೆ-ಸೀರೆ ಕೈಯ್ಯಲ್ಲಿರುವ ಅಜ್ಜನ ಕೊಡೆ, ಕಾಲ್ಗೆಜ್ಜೆ ಕಾಲುಂಗುರ ಕಣ್ಮನ ಸೆಳೆಯುತ್ತದೆ. ಇವೆರಡೂ ಪ್ರತಿಮೆಗಳು ಅಚ್ಚ ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಿದೆ.

ಅದರ ಒಳ ಹೊಕ್ಕಾಗ ಪುರಾತನ ಕಾಲದ ಪ್ರಪಂಚವೊಂದರ ಒಳಹೊಕ್ಕಂತಾಗುತ್ತದೆ. ಉಪಹಾರ ಸ್ವೀಕರಿಸುವುದಕ್ಕಾಗಿ ಐದು ರೂ.ಗಳ ಕೂಪನ್ ಅನ್ನು ಖರೀದಿಸಬೇಕು. ಒಂದು ಕೂಪನ್ ಒಂದು ತಿಂಡಿಗೆ ಮಾತ್ರ ಸೀಮಿತ. ತುಳುನಾಡಿನ ಎಲ್ಲಾ ವಿಧದ ಖಾದ್ಯಗಳನ್ನು ಇಲ್ಲಿ ನೋಡುವ ಅವಕಾಶವಿದೆ. ಹಲವಾರು ಸ್ವಸಹಾಯ ಗುಂಪು ಮತ್ತು ಸಂಘಗಳ ಸದಸ್ಯರು ತಾವು ಮಾಡಿರುವ ತಿಂಡಿ ತಿನಿಸುಗಳನ್ನು ಅಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.

ಕೂತು ತಿನ್ನಲು, ಕಟ್ಟೆ-ಬೆಂಚ್: ಅಟಿಲ್ದ ಅರಗಣೆಯೊಳಗೆ ಪ್ರವೇಶಿಸಿದಾಗ ತೆಂಗಿನ ಮರಗಳ ನಡುವಿನ ತಂಪಿನ ವಾತಾವರಣ ಮನಸೂರೆಗೊಳಿಸುತ್ತದೆ. ತೆಂಗಿನ ಮರಗಳಿಗೆ ಕಟ್ಟಲಾದ ಕಟ್ಟೆ, ಮರದ ಬೆಂಚ್ ನೋಡುವಾಗ ಹಳ್ಳಿಗಳಲ್ಲಿ ಕಂಡು ಬರುವ ಅಂಗಡಿಗಳ ನೆನಪಾಗುತ್ತದೆ. ಅಡಿಕೆಯ ಹಾಳೆಗೆ ಒಂದು ರೂ. ಕೊಟ್ಟು ಖರೀದಿಸಬೇಕು. ಅದರಲ್ಲಿ ಅಥವಾ ಅಲ್ಲೇ ಕೊಡು ಬಾಳೆ ಎಲೆಯಲ್ಲಿ ತಿಂಡಿ ತಿಂದ ಬಳಿಕ ಕಸದ ತೊಟ್ಟಿಯಲ್ಲಿ ಅದನ್ನು ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ.

ಇದು ಇಲ್ಲಿನ ವಿಶೇಷ: ಕಟ್ ಮಂಡಿಗೆ, ಸುಕರುಂಡೆ, ರಾಗಿಯ ಪಾಯಸ, ಪೇರಡ್ಯೆ, ಮಣರೋ, ಗೋಧಿ ಅಪ್ಪ, ಅಕ್ಕಿ ಅಪ್ಪ, ನೇಂದ್ರ ಬಾಳೆ ತಿಂಡಿ, ಗೋಧಿ ಲಾಡು, ಅಕ್ಕಿ ಪಾಯಸ, ಅಕ್ಕಿ ಹುಡಿ, ತೆಂಗಿನ ಕಾಯಿ ಹೋಳಿಗೆ, ಸಿಹಿ-ಖಾರ ಗುಳಿಯಪ್ಪ, ಗೋಳಿಬಜೆ, ನೆಸಲೆಯ ತಿಂಡಿ, ಎಳ್ಳಿನ ಪಾನಕ, ಅಕ್ಕಿಯ ಮನಾರ, ಖಾರ ಮನಾರ, ನೆನೆ ಅಕ್ಕಿ, ಪತ್ರೊಡೆ. ಬಾಳೆ ಎಲೆ ತಿಂಡಿ, ನೀರು ದೋಸೆ, ಉದ್ದಿನ ದೋಸೆ, ಹಲಸಿನ ಕಾಯಿ ಹಪ್ಪಳ, ತೆಂಗಿನ ಕಾಯಿ ಹಪ್ಪಳ, ರವೆ ಲಾಡು, ಅಕ್ಕಿ ರೊಟ್ಟಿ, ತೆಂಗಿನ ಕಾಯಿ ಬರ್ಫಿ, ಹಯಗ್ರೀವ, ಕಡ್ಲೆ ಅವಲಕ್ಕಿ, ಸಿಹಿ-ಸಪ್ಪೆ-ಖಾರ ಉದ್ದಿನ ತಿಂಡಿ, ಉಂಡ್ಲುಗ, ಗೆಂಡದ ಅಡ್ಯೆ, ಕಾಯಿ ಪುಂಡಿ, ಬಾಣಲೆದ ಅಡ್ಯೆ, ಪದ್ದೊಲ್ಡಿ, ಅರಶಿನ ಎಲೆಯ ತಿಂಡಿ, ನೆಯ್ಯಪ್ಪ, ಬಟಾಟೆ ಗಸಿ, ಬಟಾಣಿ ಗಸಿ, ಚರುಂಬುರಿ, ಓಡಿನ ದೋಸೆ, ಮಸಾಲೆ-ಖಾರ-ಕಡ್ಲೆ, ಸಿಹಿ ಅವಲಕ್ಕಿ, ಮುಷ್ಠಿ ಕಡುಬು, ಉದ್ದಿನ ಚಟ್ನಿ, ಸೇಮೆ ಅಡ್ಯೆ, ಬೆಲ್ಲದ ರಸಾಯನ, ಬಿತ್ತ್ ಕಜಿಪು ಇತ್ಯಾದಿ ತಿಂಡಿಗಳು ಇಲ್ಲಿನ ವಿಶೇಷತೆಯಾಗಿದೆ.

ಅಷ್ಟೇ ಅಲ್ಲ ತುಳುನಾಡಿನ ಪಾನೀಯಗಳೂ ಅಲ್ಲಿ ತುಳುವರ ದಾಹ ತಣಿಸುತ್ತಿದ್ದವು. ಜೀರಿಗೆ-ಕೊತ್ತಂಬರಿ ಕಷಾಯ, ಬೇಂಗ ಕೆತ್ತೆಯ ಕಷಾಯ, ಪುನರ್ಪುಳಿ, ಲಿಂಬೆ ಶರಬತ್, ಎಳ್ಳು ಜ್ಯೂಸ್, ಚಹಾ ಕಾಫಿ ಅಲ್ಲಿತ್ತು. ಬೆಳಿಗ್ಗೆ ಒಂದು ಬಗೆಯ ತಿಂಡಿ ಅಲ್ಲಿದ್ದರೆ ಮಧ್ಯಾಹ್ನದ ಹೊತ್ತು ಬೇರೆಯೇ ತಿಂಡಿ ತಿನಿಸುಗಳು ಅಲ್ಲಿ ಘಮಘಮಿಸುತ್ತಿತ್ತು. ವೈವಿಧ್ಯತೆ ಎದ್ದು ಕಾಣುತ್ತಿತ್ತು.

ಪ್ರಾತ್ಯಕ್ಷಿಕೆ: ತಿಂಡಿ ತಿನಿಸುಗಳನ್ನು ಸವಿಯುವುದಲ್ಲದೇ, ಅವುಗಳನ್ನು ಮಾಡುವ ವಿಧಾನಗಳನ್ನೂ ಅಲ್ಲಿ ತೋರಿಸಲಾಗುತ್ತಿತ್ತು. ವಿಶೇಷವಾದ ತಿಂಡಿ ಮನೋರಳಿ ಮಾಡುವ ವಿಧಾನವಂತೂ ಸೂಪರ್! ಮಳಿಗೆಗಳಲ್ಲಿರುವ ಮಾರಾಟಗಾರರ ಸಂಯಮದ ವಿವರಣೆ ಎದ್ದು ಕಾಣುತ್ತಿತ್ತು. ಪಾಕ ಪ್ರೇಮಿಗಳು ತಿನಿಸುಗಳನ್ನು ಸವಿದು ಖುಷಿ ಪಟ್ಟರು.

ಗತ ಕಾಲದ ನೆನಪು: ಈಗ ತುಳುವರ ಮನೆಯಲ್ಲೂ ಕಾಣ ಸಿಗದ ತಿನಿಸುಗಳು ಅಲ್ಲಿದ್ದವು. ಇಲ್ಲಿನ ತಿಂಡಿ-ತಿನಿಸುಗಳನ್ನು ನೋಡುವಾಗ ನಮ್ಮ ಕಳೆದು ಹೋದ ಕಾಲದ ನೆನಪಾಯ್ತು ಎನ್ನುತ್ತಾರೆ ಅಲ್ಲಿದ್ದ ಹಿರಿಯ ಎಲ್ಯಣ್ಣ ಗೌಡ. ಸಣ್ಣ ಮಕ್ಕಳಂತೂ ಆ ತಿಂಡಿಗಳನ್ನೆಲ್ಲಾ ನೋಡಿ ಅದೇನು ಇದೇನು ಎಂದು ಪ್ರಶ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜಂಕ್ ಫುಡ್, ಫಾಸ್ಟ್ ಫುಡ್‌ಗಳ ಮೊರೆ ಹೋಗುವ ಯುವ ಜನತೆಗೆ ಅಲ್ಲಿದ್ದ ಪ್ರತಿಯೊಂದು ತಿಂಡಿಯೂ ಮೂಗಿನ ಮೇಲೆ ಬೆರಳಿಡುವಂತಿತ್ತು. ಫಾಸ್ಟ್ ಫುಡ್ ಎಂದರೆ ಪ್ರಾಣ ಬಿಡುವ ಯುವಜನತೆ ಮನೆ ಅಡುಗೆ ಇಷ್ಟು ಚೆನ್ನಾಗಿರುತ್ತಾ? ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದರು.

ಪಾಡ್ದನ: ತಿಂಡಿ ತಿನ್ನುವಾಗ ತುಳುನಾಡಿನ ಪಾಡ್ದನ ಕೇಳುವ ಅವಕಾಶವೂ ಅಲ್ಲಿದೆ. ಅಪ್ಪಿ, ಶಾರದಕ್ಕ ಸಂಗಡಿಗರು ಅಲ್ಲಿ ಪಾಡ್ದನಹೇಳುತ್ತಿದ್ದರು. ಅಲ್ಲಿನ ವಾತಾವರಣವೇ ತುಳುವರನ್ನು ಪುಳಕಿತರನ್ನಾಗಿಸುತ್ತಿವೆ.

Yakshagaana